ಕೋಟತಟ್ಟು ಗ್ರಾಮ ಪಂಚಾಯತ್: ‘ಆಸರೆ-2026’ ಯೋಜನೆಯಡಿ 8 ಸುಸಜ್ಜಿತ ಮನೆಗಳ ಹಸ್ತಾಂತರ

February 12, 2026 4:02 PM

ಕೋಟ, ಫೆಬ್ರವರಿ 12: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ಒಂದು ಮಾದರಿ ಕಾರ್ಯಕ್ರಮಕ್ಹಕೆ ಸಾಕ್ಷಿಯಾಗಲಿದೆ. ಸರ್ಕಾರದ ಅನುದಾನ ಹಾಗೂದಾನಿಗಳ ಸಹಕಾರದೊಂದಿಗೆ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 8 ಸುಸಜ್ಜಿತ ಮನೆಗಳ ಗೃಹ ಪ್ರವೇಶ ಮತ್ತು ಹಸ್ತಾಂತರ ಕಾರ್ಯಕ್ರಮ ‘ಆಸರೆ-2026’ ಫೆಬ್ರವರಿ 14 ರಂದು ನಡೆಯಲಿದೆ.

ಚಿಟ್ಟಿಬೆಟ್ಟು ಕೊರಗ ಕಾಲೋನಿಯಲ್ಲಿ ತಲಾ 12 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಮನೆಗಳನ್ನು ನಿರ್ಮಿಸಲಾಗಿದ್ದು, ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಕೊರಗ ಕುಟುಂಬಗಳಿಗೆ ಮನೆಯನ್ನು ಹಸ್ತಾಂತರಿಸುವ ಮೂಲಕ ಅವರ ಹೊಸ ಜೀವನಕ್ಕೆ ದಾರಿದೀಪವಾಗಲಿದೆ.

ಮನೆಗಳ ಹೆಸರು ಮತ್ತು ಫಲಾನುಭವಿಗಳು:

ಈ ಮನೆಗಳಿಗೆ ನಾಡಿನ ಪುಣ್ಯ ನದಿಗಳ ಹೆಸರನ್ನು ನಾಮಕರಣ ಮಾಡಲಾಗಿದ್ದು, ವಿವರ ಹೀಗಿದೆ:

  1. ಗಂಗಾ – ಶ್ರೀಮತಿ ಲಕ್ಷ್ಮೀ
  2. ಯಮುನಾ – ಶ್ರೀಮತಿ ಶೃಂಗೇರಿ
  3. ಗೋದಾವರಿ – ಶ್ರೀಮತಿ ಗುಲಾಬಿ
  4. ಸರಸ್ವತಿ – ಶ್ರೀಮತಿ ಸುಗಂಧಿ
  5. ನರ್ಮದಾ – ಶ್ರೀಮತಿ ಸುಂದರಿ
  6. ಸಿಂಧು – ಶ್ರೀಮತಿ ಸೋನಿ
  7. ಕಾವೇರಿ – ಶ್ರೀ ರವಿ
  8. ತುಂಗಾ – ಶ್ರೀ ಮಹಾಬಲ

ಕಾರ್ಯಕ್ರಮದಲ್ಲಿ ಮನೆಗಳ ಹಸ್ತಾಂತರ ಮತ್ತು ಆಶೀರ್ವಚನ ನಡೆಯಲಿದೆ. ಧಾರ್ಮಿಕ ಗುರುಗಳು, ಸಾಮಾಜಿಕ ಮುಖಂಡರು ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದ್ದು, ದಾನಿಗಳಿಗೆ ಗೌರವಾರ್ಪಣೆ ಮಾಡಲಾಗುವುದು. ಮಧ್ಯಾಹ್ನ ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸತೀಶ್ ಕುಂದರ್, ಉಪಾಧ್ಯಕ್ಷರಾದ ಶ್ರೀಮತಿ ಸರಸ್ವತಿ, ಪಿ.ಡಿ.ಒ ಶ್ರೀ ರವೀಂದ್ರ ರಾವ್, ಕಾರ್ಯದರ್ಶಿ ಶ್ರೀಮತಿ ಸುಮತಿ ಅಂಚನ್ ಹಾಗೂ ಪಂಚಾಯತ್‌ನ ಸರ್ವ ಸದಸ್ಯರು ಸಾರ್ವಜನಿಕರನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page