• August 22, 2025
  • Last Update August 21, 2025 9:01 pm
  • Australia

Blog

Breaking news

ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಅಸ್ವಸ್ಥ ಆಸ್ಪತ್ರೆಗೆ ದಾಖಲು

ಉಡುಪಿ: ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಇಂದು (ಜು.04) ಬೆಳಗ್ಗೆ ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಹಲವು ಸಮಯಗಳಿಂದ ಅನಾರೋಗ್ಯದಿಂದ ಇದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಡಯಾಲಿಸಿಸ್‌ಗೆಂದು ಶ್ರೀ ಮಠದಿಂದ ತೆರಳಿದ ಸಂದರ್ಭ ಬ್ರಹ್ಮಾವರ ಸಮೀಪ ಅಸ್ವಸ್ಥರಾದರು. ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಮೂಲಗಳ ಪ್ರಕಾರ ಅವರು ಅವರು ಬ್ರಹ್ಮೈಕ್ಯರಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ವೈದ್ಯರ ಅಧಿಕೃತ ಘೋಷಣೆಯಾಗಿಲ್ಲ ಎಂದು ತಿಳಿದುಬಂದಿದೆ.

Read More
Breaking news

ಹಸುವಿನ ರುಂಡ ಎಸೆದ ಪ್ರಕರಣ: ಆರೋಪಿಗಳ‌ ಬಂಧನಕ್ಕೆ ಯುವಮೋರ್ಚಾ ಹರ್ಷ

ಬ್ರಹ್ಮಾವರ :ಇಲ್ಲಿಗೆ ಸಮೀಪದ ಕುಂಜಾಲಿನಲ್ಲಿ ಹಸುವಿನ ರುಂಡ ಎಸೆದ ಪ್ರಕರಣಕ್ಕೆ ಸಂಬಂದಿಸಿದಂತೆ ೬ ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ‌ ಕ್ಷೀಪ್ರ ಕಾರ್ಯಾಚರಣೆಗೆ ಉಡುಪಿ ಜಿಲ್ಲಾ ಯುವಮೊರ್ಚಾ ಶ್ಲಾಘಿಸಿದ್ದು, ಮುಂದೆ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಚ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಆಗ್ರಹಿಸಿದ್ದಾರೆ.

Read More
Breaking news

ಹಸುವಿನ ರುಂಡ ಎಸೆದ ಪ್ರಕರಣ: ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ: ಪ್ರಥ್ವಿರಾಜ್ ಶೆಟ್ಟಿ

ಬಹ್ಮಾವರ: ಇಲ್ಲಿನ ತಾಲೂಕಿನ ಕುಂಜಾಲು ರಾಮಮಂದಿರದ ಸಮೀಪದ ಸರ್ಕಲ್ ನ ಭಗವಧ್ವಜ ಬಳಿ ದುಷ್ಕರ್ಮಿಗಳು ಗೋವಿನ ರುಂಡ ಎಸೆದು ಹೋಗಿದ್ದು ಸಮಸ್ತ ಹಿಂದೂಗಳ ಭಾವನೆಗೆ ದಕ್ಕೆಯಾಗಿದೆ. ಇದು ಕಳೆದ ಒಂದು ವರ್ಷದಲ್ಲಿ ಬ್ರಹ್ಮಾವರ ಭಾಗದಲ್ಲಿ ನಡೆದ ಎರಡನೇ ಪ್ರಕರಣವಾಗಿದೆ. ಈ ಬಗ್ಗೆ ಸಮಸ್ತ ಹಿಂದೂ ಸಮಾಜ ಹೋರಾಟದ ಹಾದಿ ಹಿಡಿಯ ಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಉಡುಪಿ ಜಿಲ್ಲೆಯಲ್ಲಿ ಗೋ ಕಳ್ಳತನ, ಗೋಸಾಗಾಟ‌ ಪ್ರಕರಣಗಳು ಹೆಚ್ಚುತ್ತಿದ್ದು, ಪೋಲಿಸ್ ಇಲಾಖೆ ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳು […]

Read More
Breaking news

ಮರುಎಣಿಕೆ ಕಾನೂನು ನೀಡಿದ ಹಕ್ಕು: ಸಹಕಾರಿ ಮಿತ್ರರು

ಕೋಟ: ಇಲ್ಲಿನ ಕೋಟ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಮಿತ್ರರು ತಂಡದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಪ್ರೇಮಾ ಗಣೇಶ್ ಅವರು ಕೇವಲ ಒಂದು ಮತದಿಂದ ಸೋಲನ್ನಪ್ಪಿದ್ದರು.ಚುನಾವಣೆಯಲ್ಲಿ ಕನಿಷ್ಠ ಮತಗಳ ಅಂತರದಿಂದ ಸೋತಾಗ ಮರುಎಣಿಕೆ ಕೋರುವುದು ಕಾನೂನಾತ್ಮಕ ಹಕ್ಕಾಗಿದ್ದು, ನ್ಯಾಯಾಲಯ ಕೂಡ ಈ ಹಕ್ಕನ್ನು ಎತ್ತಿ ಹಿಡಿದಿದೆ ಎಂದು ಸಹಕಾರಿ ಮಿತ್ರರು ತಂಡದ ಮುಖಂಡ, ಕೋಟ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್‌ ಹೇಳಿದರು. ಅವರು ಜೂ.೨೮ರಂದು ಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, […]

Read More
Breaking news

ರೆಡ್‌ಅಲರ್ಟ್‌| ನಾಳೆ ಶಾಲೆಗೆ ರಜಾ

ಉಡುಪಿ: ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜೂ.12ರಂದು ಎಲ್ಲಾ ಅಂಗನವಾಡಿ, ಸರಕಾರಿ ಅನುದಾನಿತ ಶಾಲೆ ಮತ್ತು ಪ್ರೌಡಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ. ಎಲ್ಲಾ ಪದವಿಪೂರ್ವ, ಪದವಿ, ಸ್ನಾತ್ತಕೋತ್ತರ, ಡಿಪ್ಲೋಮಾ, ಎಂಜನಿಯರಿಂಗ್‌ ಮತ್ತು ಐಟಿಐ ಕಾಲೇಜಿಗಳಲ್ಲಿ ಎಂದಿನಂತೆ ಪಾಠ ಪ್ರವಚನಗಳು ಜರಗಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.

Read More
Breaking news

ಉಡುಪಿ ಮೆಸ್ಕಾಂ ; ಕಿರಿಯ ಪವರ್ ಮ್ಯಾನ್ ಗಳ ಸಹನಶಕ್ತಿ ಪರೀಕ್ಷೆ

ಉಡುಪಿ:ಕಿರಿಯ ಪವರ್ ಮ್ಯಾನ್ ಗಳ ಸಹನಶಕ್ತಿ ಪರೀಕ್ಷೆ ಕರ್ನಾಟಕ ಸರಕಾರದ ಮಂಗಳೂರು ವಿದ್ಯುತ್ ಚ್ಛಕ್ತಿ ಸರಬರಾಜು ಕಂಪನಿ ನಿಯಮಿತ , ಉಡುಪಿ ವಲಯದ ಆಶಯದಲ್ಲಿ ಅಜ್ಜರಕಾಡಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆಯಿತು. ತರಬೇತಿಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉಡುಪಿ ಮೆಸ್ಕಾಂ ಅಧೀಕ್ಷಕರಾದ ಶ್ರೀ ದಿನೇಶ್ ಉಪಾಧ್ಯಾಯ ದೀಪ ಬೆಳಗಿಸಿ ಚಾಲನೆ ನೀಡಿದರು. ಮೆಸ್ಕಾಂ ಮಂಗಳೂರ್ ತಾಂತ್ರಿಕ ನಿರ್ದೇಶಕರಾದ ಮಹದೇವಸ್ವಾಮಿ ಪ್ರಸನ್ನ , ಮೆಸ್ಕಾಂ ಮಂಗಳೂರಿನ ಆರ್ಥಿಕ ಸಲಹೆಗಾರರಾದ ಮುರುಳೀಧರ್ ನಾಯಕ್ , ಮೆಸ್ಕಾಂ ವಲಯ ನಿಯಂತ್ರಣ ಅಧಿಕಾರಿ ಉಮೇಶ್, […]

Read More
Breaking news

ಅರ್ಚಕ ರಜನೀಶ್ ಸಾಮಗ ನೆರವಿಗೆ ವಿಶು ಶೆಟ್ಟಿ

ಉಡುಪಿ: ಪಾರ್ಶ್ವವಾಯು ಪೀಡಿತ ಅರ್ಚಕ ರಜನೀಶ್ ಸಾಮಗರನ್ನು ವಿಶು ಶೆಟ್ಟಿ ಅಂಬಲಪಾಡಿ ಮನವಿ ಮೇರೆಗೆ ಸ್ವರ್ಗ ಆಶ್ರಮಕ್ಕೆ ದಾಖಲಿಸಲಾಯಿತು. ಜಿಲ್ಲಾಸ್ಪತ್ರೆಯಲ್ಲಿ ಪಾರ್ಶ್ವವಾಯುಪೀಡಿತರಾಗಿ ದಾಖಲಾದ ರಜನೀಶ್ ಸಾಮಗ ಅಸಹಾಯಕರಾಗಿದ್ದು, ಇದನ್ನು ಕಂಡ ವಿಶು ಶೆಟ್ಟಿ ಅಂಬಲಪಾಡಿ ಉಡುಪಿಯ ಕೊಳಲಗಿರಿಯ ಸ್ವರ್ಗ ಆಶ್ರಮದ ಡಾ| ಶಶಿಕಿರಣ್ ಶೆಟ್ಟಿ ಆಶ್ರಯ ಹಾಗೂ ಚಿಕಿತ್ಸೆಗಾಗಿ ಕೋರಿದ್ದರು. ಇವರ ಮನವಿಗೆ ಸ್ಪಂದಿಸಿದ ಡಾ. ಶಶಿಕಿರಣ್ ಶೆಟ್ಟಿ ಸಾಮಗರನ್ನು ದಾಖಲಿಸಿಕೊಂಡಿದ್ದಾರೆ. ಅರ್ಚಕ ರಜನೀಶ್ ಸಾಮಗ (42) ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು, ಮುಂಬೈನ ದಹಿಸರ್‌ನಲ್ಲಿ ಅರ್ಚಕ ಹಾಗೂ […]

Read More
Breaking news

ಡಾ. ರಿಶೆಲ್ ರೆಬೆಲ್ಲೋರಿಗೆ ಸನ್ಮಾನ

ಕುಂದಾಪುರ: ಮೂಳೆ, ಮತ್ತು ಕೀಲು ವೈದ್ಯಕೀಯದಲ್ಲಿ ಅಪ್ರತಿಮ ಸಾಧನೆ ಮಾಡಿದ ಡಾ. ರಿಶೆಲ್ ರೆಬೆಲ್ಲೊ ರಿಗೆ ಕುಂದಾಪುರ ತಾಲೂಕು ಮಹಿಳಾ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭರಾಧಾದಾಸ್, ಎಸ್ ಎನ್ ಹೆಬ್ಬಾರ್, ರವಿಕಿರಣ್ ಮುರ್ಡೇಶ್ವರ, ಶಲಿಯೆಟ್ ರೆಬೆಲ್ಲೊ, ಸುಧಾಕರ ಶೆಟ್ಟಿ, ಶೇಖರ ಶೆಟ್ಟಿ, ತಿಲೋತ್ತಮ ನಾಯಕ್, ಪ್ರೇಮಾ ಎಚ್, ಸಿಡಿಪಿಒ ಉಮೇಶ ಕೋಟಿಯಾನ್ ಮತ್ತಿತರರು ಉಪಸ್ಥಿತರಿದ್ದರು.

Read More
Breaking news

ಬಾರ್ಕೂರು ರೈಲ್ವೇ ನಿಲ್ದಾಣ ಕ್ರಾಸಿಂಗ್ ಸಮಸ್ಯೆ: ಸಂಸದರಿಂದ ಪರಿಶೀಲನೆ

ಬಾರ್ಕೂರು: ಇಲ್ಲಿನ ಬಾರ್ಕೂರು ರೈಲ್ವೇ ನಿಲ್ದಾಣದಲ್ಲಿ ಒಂದೇ ಫ್ಲಾಟ್ ಫಾರಂ ಇರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದು, ಹಿರಿಯ ನಾಗರೀಕರು ಮತ್ತು ಮಹಿಳೆಯರು ರಾತ್ರಿ ವೇಳೆ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಈ ಹಿನ್ನೆಲೆ ನ್ಯೂಸ್ ರೇಸ್ ಸಂಸದರ ಗಮನಸೆಳೆದಿದ್ದು, ಜೊತೆಗೆ ಬಾರ್ಕೂರು ರೈಲ್ವೇ ಹಿತರಕ್ಷಣಾ ಸಮಿತಿ ಮನವಿ‌ಮಾಡಿದ ಹಿನ್ನೆಲೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರು ರೈಲ್ವೆ ಅಧಿಕಾರಿಗಳೊಂದಿಗೆ ಬಾರ್ಕೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊಸ ಪ್ಲಾಟ್ ಫಾರಂ,ಲೂಪ್ ಲೈನ್ ,ಮಲ್ಸೇತುವೆ ನಿರ್ಮಾಣಕ್ಕೆ ಅಂದಾಜು […]

Read More
ಉಡುಪಿ

ಬ್ರಾಹ್ಮಣಸಭಾದಿಂದ ವೈದ್ಯಕೀಯ ನೆರವು

ಸಾಲಿಗ್ರಾಮ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಮೂಲಕ ಪಾರಂಪಳ್ಳಿ ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಕಡ ಗ್ರಾಮದ ಚಂದ್ರಶೇಖರ ಸೋಮಯಾಜಿ ಇವರ ಪತ್ನಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಧನ ಸಹಾಯವನ್ನು ಹಸ್ತಾಂತರಿಸಲಾಯಿತು. ಈ‌ ಸಂದರ್ಭ ಟ್ರಸ್ಟಿಗಳಾದ ಪಾರಂಪಳ್ಳಿ ಸದಾಶಿವ ಮಧ್ಯಸ್ಥ, ಮಹಾಸಭಾದ ಅಧ್ಯಕ್ಷ ಎಂ. ಶಿವರಾಮ ಉಡುಪ, ಉಪಾಧ್ಯಕ್ಷರಾದ ಪಟ್ಟಾಭಿರಾಮ ಸೋಮಯಾಜಿ, ಸುಬ್ರಾಯ ಉರಾಳ, ಮತ್ತಿತರರು ಉಪಸ್ಥಿತರಿದ್ದರು. ಸಭಾದ ಕಾರ್ಯದರ್ಶಿ ಕೆ. ರಾಜಾರಾಮ ಐತಾಳ ಸ್ವಾಗತಿಸಿ ವಂದಿಸಿದರು.

Read More
error: Content is protected !!