• August 22, 2025
  • Last Update August 21, 2025 9:01 pm
  • Australia

ಕಾರಿನಲ್ಲಿ ಮಣ್ಣು ತಂದು ಗುಂಡಿ ಮುಚ್ಚಿದ ವೃದ್ಧ

ಕಾರಿನಲ್ಲಿ ಮಣ್ಣು ತಂದು ಗುಂಡಿ ಮುಚ್ಚಿದ ವೃದ್ಧ

ಮಂಗಳೂರು: ನಗರದ ನಂತೂರು ಹೆದ್ದಾರಿಯಲ್ಲಿನ ಗುಂಡಿಗೆ ವೃದ್ಧರೋರ್ವರು ಕಾರಿನಲ್ಲಿ ಮಣ್ಣು ತಂದು ಗುಂಡಿ ಮುಚ್ಚಿರುವ ವೀಡಿಯೋ ವೈರಲ್ ಆಗಿದೆ.

ನಂತೂರು ಸರ್ಕಲ್‌ನಲ್ಲಿ ದೊಡ್ಡದಾದ ಹೊಂಡ ಸೃಷ್ಟಿಯಾಗಿತ್ತು. ಈ ಹೊಂಡಕ್ಕೆ ಬುಧವಾರ ರಾತ್ರಿ ಪಾಂಡುರಂಗ ಕಾಮತ್ ಎಂಬವರು ಕಾರಿನಲ್ಲಿಟ್ಟು ಗೋಣಿಯಲ್ಲಿ ಮಣ್ಣು ತಂದು ಮುಚ್ಚಿದ್ದಾರೆ. ಇದರ ವೀಡಿಯೋ ವೈರಲ್ ಆಗಿದೆ.

ಅಂಗಡಿ ಹೊಂದಿರುವ ಈ ರಸ್ತೆಯಲ್ಲಿ ದಿನಕ್ಕೆ ಐದಾರು ಸಲ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿರುತ್ತೇನೆ. ಈ ಹೊಂಡದಿಂದ ವಾಹನದಲ್ಲಿ ಓಡಾಟ ನಡೆಸಲು ತೊಂದರೆ ಆಗುತ್ತದೆ. ಅದಕ್ಕಾಗಿ ಈ ಹೊಂಡ ಮುಚ್ಚಲು ಮಣ್ಣು ತಂದು ಸುರಿದ್ದೇನೆ ಎಂದು ಪಾಂಡುರಂಗ ಕಾಮತ್ ಹೇಳಿದ್ದಾರೆ. ಇನ್ನಾದರೂ ಎನ್ಎಚ್ಎ ಇತ್ತ ಕಡೆ ಗಮನಹರಿಸಬೇಕಾಗಿದೆ.

administrator

Related Articles

Leave a Reply

Your email address will not be published. Required fields are marked *

error: Content is protected !!