• August 23, 2025
  • Last Update August 21, 2025 9:01 pm
  • Australia

ಗುಂಡ್ಯ ಹೆದ್ದಾರಿ ತಡೆ: 13 ಮಂದಿಗೆ ಜಾಮೀನು ಮಂಜೂರು

ಗುಂಡ್ಯ ಹೆದ್ದಾರಿ ತಡೆ:  13 ಮಂದಿಗೆ ಜಾಮೀನು ಮಂಜೂರು

ಮಂಗಳೂರು: ಕಸ್ತೂರಿ ರಂಗನ್‌ ವರದಿ ವಿರೋಧಿಸಿ ನಡೆದ ಹೋರಾಟದಲ್ಲಿ ರಸ್ತೆ ತಡೆದ ಹಿನ್ನೆಲೆ ದಾಖಲಾಗಿದ್ದ ಪ್ರಕರಣದಲ್ಲಿ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಸೇರಿ 13 ಮಂದಿಗೆ ಜಾಮೀನು ದೊರಕಿದೆ.

ನ.15ರಂದು ಮಲೆನಾಡು ಜನಹಿತ ರಕ್ಷಣ ವೇದಿಕೆ ನೇತೃತ್ವದಲ್ಲಿ ಗುಂಡ್ಯದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದ ಹಿನ್ನೆಲೆ
ಹೆದ್ದಾರಿ ತಡೆ ನಡೆಸಿದ್ದಾರೆಂದು ಉಪ್ಪಿನಂಗಡಿ ಎಸ್‌ಐ ಅವಿನಾಶ್‌ ದೂರು ನೀಡಿದ್ದರು.

ಶಾಸಕರಾದ ಭಾಗೀರಥಿ ಮುರುಳ್ಯ, ಗುರುರಾಜ್‌ ಗಂಟಿಹೊಳೆ, ಮಲೆನಾಡು ಜನಹಿತ ರಕ್ಷಣ ವೇದಿಕೆಯ ಸಂಚಾಲಕ ಕಿಶೋರ್‌ ಶಿರಾಡಿ, ಪ್ರತಿಭಟನಕಾರರಾದ ಸುಧೀರ್‌ ಶೆಟ್ಟಿ, ನವೀನ್‌ ನೆರಿಯಾ, ಸತೀಶ್‌ ಶೆಟ್ಟಿ ಬಲ್ಯ, ಉಮೇಶ್‌ ಸಾಯಿರಾಮ್‌, ವೆಂಕಟ ವಳಲಂಬೆ, ಪ್ರಕಾಶ್‌ ಗುಂಡ್ಯ, ಪ್ರಸಾದ್‌ ನೆಟ್ಟಣ, ಸಯ್ಯದ್‌ ಮೀರಾ ಸಾಹೇಬ್‌, ಉಮೇಶ್‌ ಬಲ್ಯ, ನವೀನ್‌ ರೆಖ್ಯಾ, ಯತೀಶ್‌ ಗುಂಡ್ಯ, ಗಣೇಶ್‌ ವಿರುದ್ಧ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪರ ಎಂ. ವೆಂಕಪ್ಪ ಗೌಡ ಹಾಗೂ ಲೋಕೇಶ್‌ ಗೌಡ ವಾದಿಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *

error: Content is protected !!