• August 23, 2025
  • Last Update August 21, 2025 9:01 pm
  • Australia

ತೆಂಗಿನ ಮರದಿಂದ ಬಿದ್ದು ಗೇಟಿನ ಸರಳಿಗೆ ಸಿಲುಕಿದ ಕಾಲು: ಗಾಯಾಳುವಿನ ರಕ್ಷಣೆ

ತೆಂಗಿನ ಮರದಿಂದ ಬಿದ್ದು ಗೇಟಿನ ಸರಳಿಗೆ ಸಿಲುಕಿದ ಕಾಲು: ಗಾಯಾಳುವಿನ ರಕ್ಷಣೆ

ಉಡುಪಿ: ತೆಂಗಿನ ಕಾಯಿ ಕೀಳಲೆಂದು ಬಂದ ವ್ಯಕ್ತಿಯೋರ್ವ ಮರದಿಂದ ಬಿದ್ದ ಪರಿಣಾಮ ನೇರವಾಗಿ ಗೇಟಿನ ಸರಳಿಗೆ ಸಿಲುಕಿದ ಘಟನೆ ಉಡುಪಿಯ ಲಕ್ಷ್ಮೀಂದ್ರನಗರದಲ್ಲಿ ಸಂಭವಿಸಿದೆ.

ಮಂಜೇಗೌ(36) ತೆಂಗಿನಕಾಯಿ ಕೀಳಲೆಂದು ಮರವೇರಿದ್ದ, ಈ ಸಂದರ್ಭ ಆಯತಪ್ಪಿ ಬಿದ್ದ ಪರಿಣಾಮ ಅವರ ಎಡಗಾಲು ಗೇಟಿನ ಸರಳಿನೊಳಗೆ ಸಿಲುಕಿಕೊಂಡಿದೆ. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿಗಳು ಕಾಲಿಗೆ ತಿವಿದ ಸರಳನ್ನು ಕತ್ತರಿಸಿ, ಮಂಜೇಗೌಡರನ್ನು ರಕ್ಷಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಗ್ನಿಶಾಮಕ ದಳದ ಠಾಣಾಧಿಕಾರಿ ರವೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

 

 

administrator

Related Articles

Leave a Reply

Your email address will not be published. Required fields are marked *

error: Content is protected !!