• August 23, 2025
  • Last Update August 21, 2025 9:01 pm
  • Australia

Blog

Breaking News

ವಕ್ಫ್ ಪಹಣಿಯಿದ್ದ ಸ್ಥಳದಲ್ಲಿ ಪಂಜುರ್ಲಿ ದೈವವನ್ನು ಪ್ರತಿಷ್ಠಾಪಿಸಿ : ಶ್ರೀ ರಾಜಶೇಖರಾನಂದ ಸ್ವಾಮೀಜಿ ಕರೆ

ಮಂಗಳೂರು: ಸದ್ಯ ಇಡೀ ಭಾರತ ದೇಶಕ್ಕೆ ವಕ್ಫ್ ಎಂಬ ರಾಕ್ಷಸ ವಕ್ಕರಿಸಿದ್ದಾನೆ. ಈ ರಾಕ್ಷಸನ ಸಂಹಾರಕ್ಕೆ ಹಿಂದೂಗಳೆಲ್ಲರೂ ವಕ್ಫ್ ಎಂಬ ಪಹಣಿಯ ಸ್ಥಳದಲ್ಲೆಲ್ಲಾ ವರಾಹ ಸ್ವಾಮಿ ಅಥವಾ ಪಂಜುರ್ಲಿ ದೈವವನ್ನು ಪ್ರತಿಷ್ಠಾಪಿಸಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಿಂದೂಗಳಿಗೆ ಕರೆ ನೀಡಿದ್ದಾರೆ. ವಕ್ಫ್ ಆಸ್ತಿ ವಿವಾದದ ಬಗ್ಗೆ ರಾಜ್ಯದಲ್ಲಿ ಮಾತ್ರ ಇಡೀ ದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತಿದೆ. ಇದೀಗ ವಕ್ಫ್ ಬಗ್ಗೆ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, […]

Read More
Breaking News

ಪಾರ್ಟಿ ವೇಳೆ ಗ್ಯಾಸ್‌ ಸಿಲಿಂಡರ್‌ ಸ್ಪೋಟ: ಮನೆಗೆ ಹಾನಿ

ಉಡುಪಿ: ಪಾರ್ಟಿ ನಡೆಯುತ್ತಿದ್ದ ವೇಳೆ ಗ್ಯಾ ಸ್‌ ಸಿಲಿಂಡರ್‌ ಸ್ಪೋಟಗೊಂಡ ಘಟನೆ ಉಡುಪಿಯ ಕಲ್ಸಂಕ ಸಮೀಪದ ಬಡಗುಪೇಟೆಯ ಆದಿತ್ಯ ಟವರ್‌ನಲ್ಲಿ ಸಂಭವಿಸಿದೆ. ಈ ಫ್ಲಾಟ್‌ನ ಎರಡನೇ ಮಹಡಿಯ ಮನೆಯಲ್ಲಿ ಪ.ಬಂಗಾಳ ಮೂಲದ ಕಾರ್ಮಿಕರು ಪಾರ್ಟಿ ನಡೆಸುತ್ತಿದ್ದರು. ಈ ಸಂದರ್ಭ ಇದ್ದಕ್ಕಿದಂತೆ ಗ್ಯಾಸ್‌ ಸಿಲಿಂಡರ್‌ ಸ್ಪೋಟಗೊಂಡಿದೆ. ತಕ್ಷಣ ಹೊರಕ್ಕೆ ಓಡಿಬಂದ ಕಾರ್ಮಿಕರು ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಈ ವೇಳೆ ಎಂಟು ಮಂದಿ ಕೋಣೆಯಲ್ಲಿದ್ದರು ಎನ್ನಲಾಗಿದೆ. ಘಟನೆಯ ತೀವ್ರತೆಗೆ ಕೋಣೆಗಳು ಛಿದ್ರ ಛಿದ್ರವಾಗಿದ್ದು, ಈ ಮನೆಯ ಜೊತೆಗೆ ಇನ್ನೆರೆಡು ಮನೆಗಳಿಗೂ ಹಾನಿಯಾಗಿದೆ. […]

Read More
Breaking News

ಪುತ್ತೂರು: ಭಾರೀಗಾತ್ರದ ಹೆಬ್ಬಾವನ್ನೇ ಹಿಡಿದ ಗಟ್ಟಿಗಿತ್ತಿ – ವೀಡಿಯೋ ವೈರಲ್

ಪುತ್ತೂರು: ಭಾರೀ ಗಾತ್ರದ ಹೆಬ್ಬಾವೊಂದನ್ನು ಮಹಿಳೆಯೊಬ್ಬರು ಹಿಡಿದು ಗೋಣಿಗೆ ತುಂಬಿಸಿ ಕಾಡಿಗೆ ಬಿಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಸುಳ್ಯದ ಗಡಿಪ್ರದೇಶದಲ್ಲಿ ನಡೆದಿದೆ. ಈಕೆಯ ಹಾವು ಹಿಡಿದ ಸಾಹಸದ ದೃಶ್ಯದ ವೀಡಿಯೋ ಭಾರೀ ವೈರಲ್ ಆಗಿದೆ. ಹೆಬ್ಬಾವಿನ ಗಾತ್ರವನ್ನು ಕಂಡು ಅಲ್ಲಿದ್ದ ಗಂಡಸರೇ ಬೆದರುತ್ತಿರುವಾಗ ಗಟ್ಟಿಗಿತ್ತಿ ಮಹಿಳೆ ಶೋಭಾ ಎಂಬವರು ಹೆಬ್ಬಾವನ್ನೇ ಹಿಡಿದು ತಾನು ಯಾವ ಗಂಡಸಿಗೂ ಕಡಿಮೆಯಿಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. `ಇಂಡಿಯನ್ ರಾಕ್ ಪೈತಾನ್’ ಎಂದು ಕರೆಯಲಾಗುವ ಹೆಬ್ಬಾವನ್ನು ಶೋಭಾ ಅವರು ಯಾವುದೇ ಭಯವಿಲ್ಲದೆ […]

Read More
Breaking News

ಕೇಂದ್ರ ಸರಕಾರದ ಯೋಜನೆಯ ಸಾಲಗಳಿಗೆ ಯಾವುದೇ ವಿಳಂಬ ಸಲ್ಲ: ಕೋಟ

ನ್ಯೂಸ್‌ರೇʼಸ್‌ ಡಾಟ್‌ ಇನ್‌ ವರದಿ ಕೇಂದ್ರ ಸರಕಾರದ ಯೋಜನೆಗಳಾದ ವಿಶ್ವಕರ್ಮ, ಸ್ವನಿಧಿ, ಮುದ್ರಾ ಯೋಜನೆ, ಸ್ಟಾರ್ಟ್‌ಅಪ್‌ ಮೊದಲಾದ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಲ ನೀಡಲು ಯಾವುದೇ ವಿಳಂಬ ಮಾಡುವುದು ಸರಿಯಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಾಕೀತು ಮಾಡಿದರು. ಅವರು ರಜತಾದ್ರಿಯ ಡಾ. ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಲೀಡ್‌ ಬ್ಯಾಂಕ್‌ ಜತೆ ವಿಶ್ವಕರ್ಮ ಸೇರಿದಂತೆ ಕೇಂದ್ರ ಸರಕಾರದ ವಿವಿಧ ಸಾಲಸೌಲಭ್ಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ 4465 ಮಂದಿ ಸ್ವನಿಧಿಯ ಮೊದಲ […]

Read More
Breaking News

ಮಂಗಳೂರು: ಎಂಡಿಎಂಎ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಅಂದರ್

ಮಂಗಳೂರು: ನಗರದ ಹೊರವಲಯದ ಪೆರ್ಮುದೆ ಪಂಚಾಯತ್ ಕ್ರಾಸ್‌ ಬಳಿ ಎಂಡಿಎಂಎ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಜ್ಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ 62ನೇ ತೋಕೂರು ಗ್ರಾಮದ ಜೋಕಟ್ಟೆಯ ನಿವಾಸಿ ಉಮ್ಮರ್ ಫಾರೂಕ್ ಮತ್ತು ಬಜ್ಪೆ ಜರಿನಗರದ ನಿವಾಸಿ ಮೊಹಮ್ಮದ್ ಅಬ್ದುಲ್ ಜುನೈದ್ ಬಂಧಿತ ಆರೋಪಿಗಳು. ಮಂಗಳೂರಿನ ತೆಂಕಎಕ್ಕಾರು ಗ್ರಾಮದ, ಬಜ್ಪೆಯಿಂದ ಕಟೀಲು ಕಡೆಗೆ ಹೋಗುವ ಪೆರ್ಮುದೆ ಪಂಚಾಯತ್ ಕ್ರಾಸ್‌ನಿಂದ ಅನತಿ ದೂರದಲ್ಲಿ ಆರೋಪಿಗಳು ಮಾದಕದ್ರವ್ಯ ಎಂಡಿಎಂಎ ಮಾರಾಟ ಮಾಡುತ್ತಿದ್ದರು‌. ಬಜ್ಪೆ ಠಾಣೆಯ ಪಿಎಸ್ಐ ರೇವಣಸಿದ್ದಪ್ಪರವರು ಸಿಬ್ಬಂದಿಯೊಂದಿಗೆ […]

Read More
Breaking News

ಸಹಕಾರಿ ಧುರೀಣ ಕೆ. ತಿಮ್ಮಪ್ಪ ಹೆಗ್ಡೆ ಇರ್ಮಾಡಿ ಇನ್ನಿಲ್ಲ.

[cmsmasters_row][cmsmasters_column data_width=”1/1″][cmsmasters_text] ಬ್ರಹ್ಮಾವರ: ಇಲ್ಲಿನ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕನ ಅಧ್ಯಕ್ಷ ಇರ್ಮಾಡಿ ಕೆ. ತಿಮ್ಮಪ್ಪ ಹೆಗ್ಡೆ ̇(80) ಅಲ್ಪಕಾಲದ ಅಸೌಖ್ಯದಿಂದ‌ ಭಾನುವಾರ ನಿಧನ ಹೊಂದಿದರು. 35 ವರ್ಷಕ್ಕೂ ಅಧಿಕ ಕಾಲ ಬ್ಯಾಂಕ್‌ ನ ಅಧ್ಯಕ್ಷರಾಗಿ ಬ್ಯಾಂಕನ್ನು ಮುನ್ನಡೆಸಿಕೊಂಡು ಬಂದ ಹೆಗ್ಡೆಯವರು, ಐದು ಶಾಖೆಗಳ ಬ್ಯಾಂಕನ್ನು ಎಂಟು ಶಾಖೆಗಳಾಗಿ ಮೇಲ್ದರ್ಜೆಗೇರಿಸಿದರು. ರಾಜಕೀಯ, ಧಾರ್ಮಿಕ ಮುಂದಾಳುವಾಗಿ, ಚೇರ್ಕಾಡಿ ಶಾರದಾ ಹೈಸ್ಕೂಲ್ನ‌ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾಗಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ದ.ಕ ಜಿಲ್ಲಾ ತೋಟಗಾರಿಕಾ ನಿರ್ದೇಶಕರಾಗಿ, ವಿವಿಧ ಸಂಘಟನೆಗಳಲ್ಲಿ […]

Read More
Breaking News

ಮಠ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

ಬೆಂಗಳೂರು: ಸ್ಯಾಂಡಲ್‌ವುಡ್‌ ಖ್ಯಾತ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಮನೆಯ ಅಪಾರ್ಟಮೆಂಟ್‌ನಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಟಾಟಾ ನ್ಯೂ ಹೆವೆನ್ಯೂ ಅಪಾರ್ಟಮೆಂಟ್‌ನ ಮನೆ ಸಂಖ್ಯೆ 27011ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾಸನೆ ಬಂದ ಹಿನ್ನೆಲೆ ಅಕ್ಕಪಕ್ಕದ ಮನೆಯವರಿಂದ ಪರಿಶೀಲನೆ ಬಳಿಕ ಪತ್ತೆಯಾಗಿದ್ದು, ಪೊಲೀಸರಿಂದ ಪರಿಶೀಲನೆ ನಡೆಯುತ್ತಿದೆ. ಆರ್ಥಿಕ ಸಂಕಷ್ಟಗಳಿಂದ ಬೇಸತ್ತಿದ್ದ ಗುರುಪ್ರಸಾದ್‌, ಮೇಲೆ ಹಲವು ಚೆಕ್‌ಬೌನ್ಸ್‌ ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲಾ ಕಿರಿಕಿರಿಗಳಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದ. 1972ರಲ್ಲಿ ರಾಮನಗರದ […]

Read More
Breaking News

ಕಾಳಿಂಗ ಸರ್ಪದ ಮಲೆನಾಡಿನ ಪ್ರಬೇದಕ್ಕೆ ಕನ್ನಡದ ಹೆಸರು

[cmsmasters_row][cmsmasters_column data_width=”1/1″][cmsmasters_text] ಆಗುಂಬೆ: ಮಲೆನಾಡಿನ ಆಗುಂಬೆ ಮೊದಲಾದ ಪರಿಸರದಲ್ಲಿ ಕಂಡು ಬರುವ ಕಾಳಿಂಗ ಸರ್ಪಗಳಿಗೆ ಇನ್ನು ಮುಂದೆ ಓಫಿಯೋಫಾಗಸ್ ಕಾಳಿಂಗ ಎಂಬ ವೈಜ್ಞಾನಿಕ ಹೆಸರನ್ನು ನೀಡಲಾಗಿದೆ. ಕಾಳಿಂಗ ಸರ್ಪಗಳ ಸಂಶೋಧಕ ಗೌರಿಶಂಕರ್‌ ಅವರು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, 10 ವರ್ಷಗಳ ಅಧ್ಯಯನದ ಫಲಶ್ರುತಿಯಾಗಿ ಪಶ್ಚಿಮಘಟ್ಟಗಳಲ್ಲಿ ಕಂಡುಬರುವ ಕಾಳಿಂಗ ಸರ್ಪಗಳಿಗೆ ಓಫಿಯೋಫಾಗಸ್ ಕಾಳಿಂಗ ಎಂಬ ವೈಜ್ಞಾನಿಕ ಹೆಸರನ್ನು ನೀಡಿದ್ದಾರೆ. ಕಾಳಿಂಗ ಸರ್ಪಗಳು ಓಫಿಯೋಫಾಗಸ್ ಎಂಬ ಕುಲಕ್ಕೆ ಸೇರಿದ ಸರಿಸೃಪವಾಗಿದ್ದು, ದಕ್ಷಿಣ ಏಷ್ಯಾದಲ್ಲಿ ಕಂಡು […]

Read More
Breaking News

ನಿಂತಿದ್ದ ಲಾರಿಗೆ ಟೂರಿಸ್ಟ್‌ ಬಸ್‌ ಢಿಕ್ಕಿ: ಹಲವರು ಗಂಭೀರ

ಕಟಪಾಡಿ: ನಿಂತಿದ್ದ ಲಾರಿಗೆ ಟೂರಿಸ್ಟ್‌ ವಾಹನ ಢಿಕ್ಕಿ ಹೊಡೆದ ಪರಿಣಾಮ ಹಲವು ಗಂಭೀರ ಗಾಯಗೊಂಡ ಘಟನೆ ಉದ್ಯಾವರ ಪೆಟ್ರೋಲ್‌ ಬಂಕ್‌ ಬಳಿ ರಾ.ಹೆ. 66ರಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ. ಕೊಲ್ಲೂರು ದೇವಸ್ಥಾನಕ್ಕೆಂದು ಹೊರಟಿದ್ದ ತಮಿಳುನಾಡು ಮೂಲದ ತಂಡ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಟೂರಿಸ್ಟ್‌ ವಾಹನ ಅರ್ಧದಷ್ಟು ಜಖಂಗೊಂಡಿದೆ. ಘಟನೆಯಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ನಿದ್ರೆ ಮಂಪರಿನಲ್ಲಿ ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರ ಅಂದಾಜಿಸಿದ್ದಾರೆ. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು […]

Read More

ನ.3 ಉಚಿತ ದಂತ ಚಿಕಿತ್ಸಾ ಶಿಬಿರ

ಬ್ರಹ್ಮಾವರ: ಫ್ರೆಂಡ್ಸ್ ಕ್ಲಬ್ ಸಾಲಿಕೇರಿ ಆಶ್ರಯದಲ್ಲಿ, ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಮುದಾಯ ಆರೋಗ್ಯ‌ ಕೇಂದ್ರ ಬ್ರಹ್ಮಾವರ ಸಹಯೋಗದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಹಾರಾಡಿಯ ವಿದ್ಯಾಮಂದಿರ ಶಾಲೆಯಲ್ಲಿ ನ.03ರಂದು ನಡೆಯಲಿದೆ. ಬೆಳಗ್ಗೆ 9:00ಕ್ಕೆ ಕಾರ್ಯಕ್ರಮ ನಡೆಯಲಿದ್ದು ವಿವಿಧ ರೀತಿಯ ದಂತ ಸಮಸ್ಯೆಗಳಿಗೆ ಚಿಕಿತ್ಸೆ ದೊರಕಲಿದೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆಯಬೇಕೆಂದು ಸಂಘಟಕರು ಕೋರಿದ್ದಾರೆ.

Read More
error: Content is protected !!