• August 23, 2025
  • Last Update August 21, 2025 9:01 pm
  • Australia

ಬಾರ್ಕೂರು ರೈಲ್ವೇ ನಿಲ್ದಾಣ ಕ್ರಾಸಿಂಗ್ ಸಮಸ್ಯೆ: ಸಂಸದರಿಂದ ಪರಿಶೀಲನೆ

ಬಾರ್ಕೂರು ರೈಲ್ವೇ ನಿಲ್ದಾಣ ಕ್ರಾಸಿಂಗ್ ಸಮಸ್ಯೆ: ಸಂಸದರಿಂದ ಪರಿಶೀಲನೆ

ಬಾರ್ಕೂರು: ಇಲ್ಲಿನ ಬಾರ್ಕೂರು ರೈಲ್ವೇ ನಿಲ್ದಾಣದಲ್ಲಿ ಒಂದೇ ಫ್ಲಾಟ್ ಫಾರಂ ಇರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದು, ಹಿರಿಯ ನಾಗರೀಕರು ಮತ್ತು ಮಹಿಳೆಯರು ರಾತ್ರಿ ವೇಳೆ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಈ ಹಿನ್ನೆಲೆ ನ್ಯೂಸ್ ರೇಸ್ ಸಂಸದರ ಗಮನಸೆಳೆದಿದ್ದು, ಜೊತೆಗೆ ಬಾರ್ಕೂರು ರೈಲ್ವೇ ಹಿತರಕ್ಷಣಾ ಸಮಿತಿ ಮನವಿ‌ಮಾಡಿದ ಹಿನ್ನೆಲೆ

ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರು ರೈಲ್ವೆ ಅಧಿಕಾರಿಗಳೊಂದಿಗೆ ಬಾರ್ಕೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊಸ ಪ್ಲಾಟ್ ಫಾರಂ,ಲೂಪ್ ಲೈನ್ ,ಮಲ್ಸೇತುವೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದರು

ಮತ್ಯಗಂಧ ಎಕ್ಸಪ್ರೆಸ್ ಮತ್ತು ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲು ಏಕಕಾಲದಲ್ಲಿ ಬಂದಾಗ ಪ್ರಯಾಣಿಕರ ಪಾಡು

ಈ ಸಂದರ್ಭದಲ್ಲಿ ಕಾರವಾರರೈಲ್ವೆ ಪ್ರಾದೇಶಿಕ ಅಧಿಕಾರಿ ಆಶಾ ಶೆಟ್ಟಿ, ಸಿವಿಲ್ ಇಂಜಿನಿಯರ್ ವಿಜಯ್ ಕುಮಾರ್,ರೈಲ್ವೆ ಹೋರಾಟಗಾರ ಗೌತಮ್ ಕುಂದಾಪುರ, ಗಣೇಶ್ ಪುತ್ರನ್, ಬಾರ್ಕೂರು ರೈಲು ಹಿತರಕ್ಷಣಾ ಸಮಿತಿಯ ಪ್ರಮುಖರಾದ ಬಾರ್ಕೂರು ಶಾಂತಾರಾಮ್ ಶೆಟ್ಟಿ, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಕಾಶ್ ಶೆಟ್ಟಿ ಯಡ್ತಾಡಿ, ಗಣೇಶ್ ಶೆಟ್ಟಿ, ರತ್ನಾಕರ ಶೆಟ್ಟಿ, ದೇವದಾಸ್ ಹೊಸ್ಕೆರೆ ಮೊದಲಾದವರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *

error: Content is protected !!