• November 23, 2025
  • Last Update November 14, 2025 3:04 pm
  • Australia

ಬಾಳೆಕುದ್ರು ಶ್ರೀ ರಾಮಮಂದಿರ: ಸಂಭ್ರಮದಲ್ಲಿ ಜರಗಿದ ಹೊಸ್ತಿಲುಪೂಜೆ

ಬಾಳೆಕುದ್ರು ಶ್ರೀ ರಾಮಮಂದಿರ: ಸಂಭ್ರಮದಲ್ಲಿ ಜರಗಿದ ಹೊಸ್ತಿಲುಪೂಜೆ

ಹಂಗಾರಕಟ್ಟೆ: ಸಿಂಹ ಮಾಸದಲ್ಲಿ ಪ್ರತಿ ಬ್ರಾಹ್ಮಣ ಮನೆಗಳಲ್ಲಿ ನಡೆಯುವ ಹೊಸ್ತಿಲು ಪೂಜೆಯನ್ನು ಬಾಳೆಕುದ್ರು ಶ್ರೀ ರಾಮ ಮಂದಿರದಲ್ಲಿ ವಿಪ್ರವೇದಿಕೆ ಐರೋಡಿ ವತಿಯಿಂದ ನೆರವೇರಿತು.

ಐರೋಡಿ, ಪಾಂಡೇಶ್ವರ, ಮಾಬುಕಳ ಮತ್ತು ಬಾಳೆಕುದ್ರು ವ್ಯಾಪ್ತಿಯ ನೂರಾರು ವಿಪ್ರ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಪಾರಾಯಣ ನಡೆಯಿತು.

ಈ ಸಂದರ್ಭ ಮಾತನಾಡಿದ ಸಂಘಟನೆ ಅಧ್ಯಕ್ಷ ವಿಘ್ನೇಶ್ವರ ಅಡಿಗ, ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಆಯೋಜಕ ಸುರೇಶ್ ಅಡಿಗ ಮಾತನಾಡಿ, ಹೊಸ್ತಿಲು ಪೂಜೆ ಎನ್ನುವುದು ಹೊಸ್ತಿಲಜ್ಜಿಯನ್ನು ಆಹ್ವಾನಿಸಿ, 30ಕ್ಕೂ ಬಗೆಯ ಪುಷ್ಪಗಳಿಂದ ಅಲಂಕರಿಸಿ, ಪೂಜೆಯನ್ನು ನಡೆಸುವ ಸಂಪ್ರದಾಯ. ನಾವು ಚಿಕ್ಕವರಿದ್ದಾಗ ನೆಂಟರೊಂದಿಗೆ ಸಂಭ್ರಮಿಸುತ್ತಿದ್ದ ನೆನಪಿನ ಪ್ರೇರಣೆಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಹೊಸ್ತಿಲು ಪೂಜೆಯನ್ನು ಜಯಲಕ್ಷ್ಮಿ ವಾರಂಬಳ್ಳಿ ಪ್ರಾರಂಬಿಸಿದರು. ನೂರಾರು ಮಹಿಳೆಯರು ಭಕ್ತಿಭಾವದಿಂದ ಪೂಜೆಯನ್ನು ನೆರವೇರಿಸಿದರು.

administrator

Related Articles

Leave a Reply

Your email address will not be published. Required fields are marked *

error: Content is protected !!